ಸ್ವಗತ

ಹೆಜ್ಜೆಗಳು ಸೋತು ದಿನದ ಸೂರ್ಯ
ಕಂತಿದ್ದಾನೆ ನಾಳೆಯ ಕಾಲವ ನಡೆಸುವ
ರಾತ್ರಿಯಲಿ ಚೆಲ್ಲಿವೆ ನಕ್ಷತ್ರಗಳು ಬಾನತುಂಬ
ಮನದ ಭಾವಕೆ ವಿದಾಯವಲ್ಲ ಇದು
ಹೊಸಹುಟ್ಟು ತೆರೆದುಕೊಳ್ಳುವ ಬಸಿರು
ಬಾಹು ಬಂಧನಗಳು ಹರಡಿವೆ ಇಳೆಯಲಿ.

ಸಿದ್ಧಾರ್ಥನ ಹುಡುಕಾಟದ ಕಳವಳ
ಎತ್ತಿ ಕುಡಿದ ಬಾಹುಬಲಿ ಯಾವುದು
ಸತ್ಯ ಈ ತಿಳಿಗೇಡಿ ವಿಸ್ಮಯ ಲೋಕದಲಿ
ನಿದ್ರೆಗೆ ಅಮಲು ಬರಿಸುವ ಸಂಜೆಯಲಿ
ಹಕ್ಕಿಗಳು ಹಾರಿವೆ ಹಿಂಡು ಹಿಂಡಾಗಿ
ಗೂಡು ಅರಸುತ್ತ ಅಲೆದಿವೆ ನಿರಂತರ ಸನ್ನೆಗಳಲಿ.

ಹತ್ತಿರ ಸುಳಿದಾಡಿದ ಸ್ತರಗಳು
ಸೋಕಲಿಲ್ಲ ಹೃದಯದ ಬಾಗಿಲುಗಳಲಿ
ಕೈ ತಟ್ಟಿ ತಪ್ಪಾಳೆ ತಟ್ಟದವರು ಹೀಗೆ
ಸರಳವಾಗಿ ಒಳ ಬಂದು ನಗಲಿಲ್ಲ ಒಂದು ತಿಳಿನಗೆ,
ಜ್ಞಾಪಕವಿಲ್ಲದೆ ಹಾಡುಗಳು ಒಮ್ಮೆಲೇ
ಒಲಿದು ರಾಗಗಳಾಗುವುದಿಲ್ಲ ರೀತಿ ರಿವಾಜಗಳು.

ನದಿಯಲಿ ರಮಿಸುತ್ತ ಸಾಗಿವೆ
ಬೆಳಕಿನ ಬೀಜಗಳು ಸಂತೆಯಲಿ
ಸಂತನೊಬ್ಬ ಸರಿದ್ದಾನೆ ಯಾರಿಗೂ ತಿಳಿಯದಂತೆ,
ಕಂದೀಲು ಒರೆಸುವ ಕೈಗಳು ಅಲುಗಾಡಿವೆ
ಪಾರಿವಾಳಗಳು ಸತ್ತಿವೆ ಗೇಟವೇ ಆಫ್ ಇಂಡಿಯಾದಲಿ,
ಉಲ್ಕಾಪಾತದ ಕತ್ತಲೆಯಲಿ ಹೊಸದಾರಿಗಳು
ತೆರೆದುಕೊಂಡಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಗಲಿದೊ ಮುಗಿಯುತ ಬಂತು
Next post ಯಕ್ಷಪ್ರಶ್ನೆ?

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys